Sad Demise: Shri Suresh Hande

Dear Members,

We regret to inform you all the news of the passing of Shri G. Suresh Hande, who was serving as the Manager of the Dakshina Kannada Koota Brahmana Mitra Mandali. He was admitted to the hospital on 01.09.2024 due to a sudden liver ailment, and within a few days, his condition worsened. Despite treatment, he passed away on Wednesday, 11.09.2024. 

Shri Suresh Hande was well-regarded in the community for his hard work and dedicated service. Born on 05.04.1956 to late Shri J. Shankaranarayan Hande, a teacher at Gilyaru Shambhavi Higher Primary School, and late Parvati (daughter of Paramashwara Maiyya), he had been with the Mitra Mandali since April 2004, providing nearly 20 years of continuous service. His skills and commitment helped him manage the Mandali’s affairs effectively. He was appreciated by office bearers, executive committee members, and general members alike, and earned the trust of his colleagues and workers. Shri Suresh Hande’s passing is a significant loss for the Mandali.

In a meeting held on 24.09.2024, the Dakshina Kannada Koota Brahmana Mitra Mandali Executive Committee expressed its condolences and recorded his 20 years of valuable service with appreciation. Prayers were offered to Lord Guru Narasimha for his soul, and the committee also extended its wishes for strength and comfort to his wife during this difficult time.

Sincerely,
Dr. K. Suresh Aithal
Secretary, DKKBMM

ಸದಸ್ಯರ ಗಮನಕ್ಕಾಗಿ

ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿಯಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಜಿ.ಸುರೇಶ ಹಂದೆಯವರು ಹಠತ್ತಾಗಿ ಕಾಣಿಸಿಕೊಂಡ ಯಕೃತ್ತಿನ ಕಾಯಿಲೆಯಿಂದ ದಿನಾಂಕ 01.09.24ರಂದು ಆಸ್ಪತ್ರೆಗೆ ದಾಖಲಾದ ನಂತರ ಒಂದೆರಡು ದಿನಗಳಲ್ಲಿ ವಿಷಮ ಪರಿಸ್ಥಿತಿ ತಲುಪಿ, ಚಿಕಿತ್ಸೆ ಫಲಕಾರಿಯಾಗದೆ, ದಿನಾಂಕ 11.09.2024 ಬುಧವಾರದಂದು ಕೊನೆಯುಸಿರೆಳೆದಿರುವುದು ಅತ್ಯಂತ ಆಘಾತಕಾರಿ ಹಾಗೂ ವಿಷಾದದ ಸಂಗತಿಯಾಗಿದೆ.

ಶ್ರೀಯುತ ಸುರೇಶ ಹಂದೆಯವರು ತಮ್ಮ ಅವಿರತ ಪರಿಶ್ರಮ ಹಾಗೂ ನಿಷ್ಟಾವಂತ ಸೇವೆಯಿಂದಾಗಿ ಸಮಾಜದಲ್ಲಿ ಜನಮನ್ನಣೆಗಳಿಸಿದ್ದರು. ಗಿಳಿಯಾರು ಶಾಂಭವಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ದಿ.ಜಿ.ಶಂಕರನಾರಾಣ ಹಂದೆ ಮತ್ತು ದಿ.ಪರಮೇಶ್ವರ ಮಯ್ಯರ ಮಗಳಾದ ದಿ.ಪಾರ್ವತಿ ದಂಪತಿಗಳಿಗೆ ದಿನಾಂಕ 05.04.1956 ರಂದು ಮಗನಾಗಿ ಜನಿಸಿದ ಶ್ರೀ ಜಿ.ಸುರೇಶ ಹಂದೆಯವರು ಏಪ್ರಿಲ್2004 ರಿಂದ ಮಿತ್ರಮಂಡಳಿಯ ಉದ್ಯೋಗಿಯಾಗಿ ಸುಮಾರು 20 ವರ್ಷಗಳ ನಿರಂತರ ಸೇವೆ ಸಲ್ಲಿಸಿರುತ್ತಾರೆ.

ಕಲಿತ ವಿದ್ಯೆಗಿಂತ ಗಳಿಸಿದ ಸಾಮರ್ಥ್ಯ ಹಾಗೂ ಸ್ವಂತ ಪ್ರತಿಭೆಯಿಂದಾಗಿ ಮಿತ್ರಮಂಡಳಿಯ ಎಲ್ಲಾ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಂಸ್ಥೆಯನ್ನು ಸರಿದೂಗಿಸಿಕೊಂಡು ಸಾಗುವಲ್ಲಿ ಯಶಸ್ವಿಯಾಗಿದ್ದರು. ಎಲ್ಲಾ ಪದಾಧಿಕಾರಿಗಳ ಹಾಗೂ ಕಾರ್ಯನಿರ್ವಾಹಕ ಮಂಡಳಿ ಸದಸ್ಯರುಗಳ ನಂಬಿಕೆಗೆ ಪಾತ್ರರಾಗಿದ್ದ ನೆಚ್ಚಿನ ಸುರೇಶ ಹಂದೆಯವರು ಸಾಮಾನ್ಯ ಸದಸ್ಯರ ಹಾಗೂ ಕೂಟ ಬಂಧುಗಳ ಮೆಚ್ಚುಗೆ ಗಳಿಸಿದ್ದರು. ತಮ್ಮ‌ಕಾರ್ಯಕ್ಷೇತ್ರದಲ್ಲಿ ಸಹೋದ್ಯೋಗಿಗಳ, ಕಾರ್ಮಿಕರ ಹಾಗೂ ವ್ಯವಸ್ಥೆಯ ಇತರ ಬಾಗಿದಾರರ ಅಪಾರ ವಿಶ್ವಾಸಗಳಿಸಿರುತ್ತಾರೆ.

ಆತ್ಮೀಯ, ಸರಳ, ಸಜ್ಜನಿಕೆಯ ಅಮೂರ್ತರೂಪರಾದ ಶ್ರೀ ಸುರೇಶ ಹಂದೆಯವರ ನಿಧನದಿಂದಾಗಿ ದ.ಕ.ಕೂಟ ಬ್ರಾಹ್ಮಣರ ಮಿತ್ರಮಂಡಳಿಯ ಕಾರ್ಯನಿರ್ವಾಹಕ ಮಂಡಳಿಯು ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ ಮತ್ತು ದಿನಾಂಕ 24.09.2024 ರಂದು ನಡೆದ ಸಭೆಯಲ್ಲಿ ಹಂದೆಯವರು 20 ವರ್ಷಗಳ ದೀರ್ಘಕಾಲ ಸಲ್ಲಿಸಿದ ಅಮೂಲ್ಯ ಸೇವೆಯನ್ನು ಪ್ರಶಂಸೆಯೊಂದಿಗೆ ದಾಖಲಿಸಲು ತೀರ್ಮಾನಿಸಲಾಯಿತು. ಶ್ರೀ ಸುರೇಶ ಹಂದೆಯವರ ಆತ್ಮ ಸಾಯುಜ್ಯ ಪಡೆಯಲಿ ಎಂದು ಶ್ರೀ ಗುರುನರಸಿಂಹನಲ್ಲಿ ಪ್ರಾರ್ಥಿಸಲಾಯಿತು. ಹಂದೆಯವರ ಅಗಲಿಕೆಯಿಂದ ಉಂಟಾದ ದುಃಖವನ್ನು ಸಹಿಸುವ ಶಕ್ತಿ ಅವರ ಪತ್ನಿಗೆ ಶ್ರೀ ದೇವರು ಕರುಣಿಸಲಿ ಎಂದು ಕಾರ್ಯನಿರ್ವಾಹಕ ಮಂಡಳಿ ಹಾರೈಸುತ್ತದೆ.

ಸಹಿ/-
ಕಾರ್ಯದರ್ಶಿ

Similar Posts

  • 2025 Election Results

    ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ (ರಿ), ಬೆಂಗಳೂರು – 560004 ಚುನಾವಣಾ ಫಲಿತಾಂಶ ದಿನಾಂಕ: 21.09.2025 ಸ್ಥಳ: ಗುರುನರಸಿಂಹ ಕಲ್ಯಾಣ ಮಂದಿರ, ಬೆಂಗಳೂರು ಸಂಸ್ಥೆಯ 56ನೇ ಸರ್ವಸದಸ್ಯರ ಸಭೆಯಲ್ಲಿ 2025-26 ರಿಂದ 2027-28ರವರೆಗೆ ಮೂರು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಗಾಗಿ ನಡೆದ ಚುನಾವಣಾ ಫಲಿತಾಂಶ ಈ ಕೆಳಗಿನಂತೆ ಘೋಷಿಸಲಾಯಿತು. ಅಧ್ಯಕ್ಷರು ಡಾ. ಪಿ. ವಿಷ್ಣುಮೂರ್ತಿ ಐತಾಳ್ ಚುನಾವಣಾಧಿಕಾರಿ ವರದಿ I. ಪದಾಧಿಕಾರಿಗಳ ಸ್ಥಾನಗಳು 1. ಗೌರವ ಅಧ್ಯಕ್ಷ ಸ್ಥಾನ ✅ ಫಲಿತಾಂಶ: ಡಾ….

  • Scholarship distribution at Saligrama

    From the Education Fund of the Dakshina Kannada Koota Brahmanara’s Mitra Mandali, the scholarship for the academic year 2024-2025 will be distributed to students from Saligrama and nearby areas. Kindly note the details below. All are requested to participate. 📅 Date:15th January 2025 (Wednesday) ⏰ Time:4:00 PM 📍 Venue: Koota Bandhu Bhavan, 2nd Floor (within…

  • Support for Suresh Hande’s Family

    ಮನವಿಮಾನ್ಯ ಸದಸ್ಯರೇ, ನಮ್ಮ ಸಂಸ್ಥೆಯ ವ್ಯವಸ್ಥಾಪಕರಾಗಿದ್ದ, ಹಾಗೂ ನಮ್ಮ ಸಂಸ್ಥೆಯಲ್ಲಿ ಸುಮಾರು ಇಪ್ಪತ್ತು ವರ್ಷಕ್ಕೂ ಮಿಗಿಲಾಗಿ ಸೇವೆ ಸಲ್ಲಿಸಿದ್ದ ಶ್ರೀಯುತ ಸುರೇಶ ಹಂದೆಯವರು ಅಕಾಲಿಕವಾಗಿ ಹಾಗೂ ಆಕಸ್ಮಿಕ ನಿಧಾನವಾಗಿರುವುದು ತಮಗೆಲ್ಲ ತಿಳಿದಿರುತ್ತದೆ. ನಮ್ಮ ವಾರ್ಷಿಕ ಮಹಾಸಭೆಯಲ್ಲಿ ನಮ್ಮ ಅಧ್ಯಕ್ಷರು, ಶ್ರೀಯುತ ಹಂದೆಯವರ ಅಕಾಲಿಕ ಹಾಗೂ ಹಠಾತ್ ನಿಧನದಿಂದ ಅವರ ಕುಟುಂಬಕ್ಕೆ ಆಘಾತವಾಗಿದ್ದು ಅವರ ಮುಂದಿನ ಕುಟುಂಬ ನಿರ್ವಹಣೆಗಾಗಿ ಉದಾರವಾಗಿ ದೇಣಿಗೆ ನೀಡಲು ಮನವಿ ಮಾಡಿಕೊಂಡಿದ್ದರು. ಆದರೆ ಇದುವರೆಗೂ ಯಾವುದೇ ಸ್ಪಂದನೆಯ ಮಾಹಿತಿ ನಮ್ಮ ಅವಗಾಹನೆಗೆ ಬಂದಿರುವುದಿಲ್ಲ. ಆದ್ದರಿಂದ…

  • Community Service & Cultural Programme

    Dakshina Kannada Koota Brahmana Mitra Mandali (Regd.), Bengaluru, is pleased to announce a full-day community service and cultural programme on Sunday, 04 January 2026, at Gurunarasimha Kalyana Mantapa premises. Morning Session – Free Medical Camp (9:00 AM to 1:00 PM) As part of its social responsibility, a Free Medical Camp will be conducted with the…

  • Disruption in Gas Supply & New Guidelines

    ಯುದ್ಧದ ಪರಿಣಾಮದಿಂದ ಬೆಂಗಳೂರು ನಗರದಾದ್ಯಂತ ಕಳೆದ ಕೆಲವು ದಿನಗಳಿಂದ ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯವಾಗಿರುವುದು ತಮಗೆಲ್ಲ ತಿಳಿದಿದೆ. ನಮ್ಮ ಕಲ್ಯಾಣ ಮಂದಿರಕ್ಕೂ ವಾಣಿಜ್ಯ ಅನಿಲ ಸಿಲಿಂಡರ್ ಸರಬರಾಜು ಸ್ಥಗಿತಗೊಂಡಿದೆ. ಈ ಅನಿಶ್ಚಿತ ಪರಿಸ್ಥಿತಿ ಇರುವವರೆಗೂ ನಮ್ಮ ಕಲ್ಯಾಣ ಮಂದಿರದ ಆವರಣದಲ್ಲಿ ಕಾರ್ಯಕ್ರಮ ನಡೆಸುವವರು ಅಗತ್ಯವಿರುವ ವಾಣಿಜ್ಯ ಗ್ಯಾಸ್ ಸಿಲಿಂಡರನ್ನು ತಾವೇ ತರಬೇಕು ಅಥವಾ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು. ಕಲ್ಯಾಣ ಮಂದಿರದಲ್ಲಿ ಗೃಹಬಳಕೆ ಅನಿಲ ಸಿಲಿಂಡರ್ (Domestic LPG) ಬಳಸಲು ಕಾನೂನು ರೀತ್ಯಾ ಅವಕಾಶವಿರುವುದಿಲ್ಲ ಮತ್ತು ಅಪರಾಧ ಕೂಡ…

Leave a Reply

Your email address will not be published. Required fields are marked *